bi

href="http://www.freebiebitcoin.com">Earn

Sunday, January 9, 2011

ಭಾರತದಲ್ಲಿ ಭಾರತವೇ ತಬ್ಬಲಿ??!!

ಕಾಶ್ಮೀರದಲ್ಲಿ  ತ್ರಿವರ್ಣಧ್ವಜ ಹಾರಿಸಿದರೆ ಆಗುವ ದುಶ್ಪರಿಣಾಮಕ್ಕೆ ಬಿಜೆಪಿಯೇ ಹೊಣೆ --ಫರೂಖ್ ಅಬ್ದುಲ್ಲ  ಈ ಹೇಳಿಕೆ ನೀಡಿದ್ದು ಕಾಶ್ಮೀರದ ಆಡಳಿತಾರೂಡ ಪಕ್ಷದ ಸಂಸ್ತಾಪಕ,ಮಾಜಿ ಮುಖ್ಯಮಂತ್ರಿ,ಹಾಲಿ ಮುಖ್ಯಮಂತ್ರಿ ತಂದೆ ಫರೂಖ್ ಅಬ್ದುಲ್ಲ!!!!
ಹಾಗಿದ್ದರೆ  ಭಾರತದಲ್ಲಿ ಇನ್ನ್ಯಾವ  ಧ್ವಜ ಹಾರಿಸಬೇಕು? ಪಾಕಿಸ್ತಾನದ್ದೆ? ಚೈನಾದ್ದೆ? ಯಾ  ಪ್ರಪಂಚದ ಹಿರಿಯಣ್ಣ  ಅಮೇರಿಕದ್ದೆ?!!

ಈ ಹೇಳಿಕೆಯನ್ನು ಶ್ರಿಸಾಮಾನ್ಯನೊಬ್ಬ ನೀಡಿದ್ದರೆ, ದೇಶದ್ರೋಹದ ಆಪಾಧನೆಮೇರೆಗೆ ಜೈಲಿಗೆ ಕಳುಹಿಸುತ್ತಿದ್ದರು! ಆದರೆ ಈಃಹೀಳಿಕೆ ನೀಡಿದ್ದು ಕಾಶ್ಮೀರ ಆಡಳಿತ ಪಕ್ಷದ ಅಧ್ಯಕ್ಷ !
ಭಾರತೀಯ  ರಾಜ್ಯಸರ್ಕಾರವೊಂದು  ಇಂತಹ ದೇಶದ್ರೋಹದ ಹೇಳಿಕೆ ನೀಡಿರುವಾಗ ಕೇಂದ್ರಸರ್ಕಾರ ಜಾಣಕಿವುಡು ತೋರಿಸುತ್ತಿದೆ!
ನಾನಿಲ್ಲಿ ಯಾವುದೆ ಪಕ್ಷವನ್ನು  ಹೊಗಳುವುದಾಗಲಿ ಯಾ ತೆಗಳುವುದಾಗಲಿ ಮಾಡುತ್ತಿಲ್ಲ, ಎಲ್ಲಾ ಪಕ್ಷಗಳನ್ನು ಒಂದೆ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದೆನೆ.ಏಕೆಂದರೆ ಇಲ್ಲಿ ಯಾವುದೆ ಪಕ್ಷಗಳು  ಧೇಶಾಭಿಮಾನವನ್ನಿಟ್ಟು ಜಾತಾ, ಹೇಳಿಕೆಯನ್ನು ನೀಡುತ್ತಿಲ್ಲ, ಕೇವಲ  ಸ್ವಪ್ರತಿಷ್ಟೆಗಾಗಿ ಪರಸ್ಪರ ಕೆಸರೆಚಾಟದಲ್ಲಿ ನಿರತವಾಗಿವೆ.           
ಕಾಶ್ಮೀರದಲ್ಲಿರುವ ಪಂಡಿತ್ ಸಮುದಾಯವನ್ನು ಓಲೈಸಿ ತನ್ಮೂಲಕ ತನ್ನ ನೆಲೆ ಸ್ತಾಪಿಸುವ ದೂರಾಲೋಚನೆಯಿಂದ ಬಿಜೆಪಿ ತ್ರಿವರ್ಣಧ್ವಜ ದಂತಹ ಅಜೆಂಡ ಕೈಗೆತ್ತಿಕೊಂಡರೆ,ಮುಸ್ಮಿಮರ ಓಲೈಕೆಗಾಗಿ  ಫರೂಖ್ ಇತಂಹ ಹೇಳಿಕೆ ನೀಡುತ್ತಿದ್ದಾರೆ.
ಫರೂಖ್ ಟೀಕಿಸುತ್ತಿರುವುದು ವಿರೋಧ ಪಕ್ಷವಾದ ಬಿಜೆಪಿಯನ್ನುವ ಕಾರಣಕ್ಕಾಗಿ  ಕಾಂಗ್ರೆಸ್ ಜಾಣಮೌನವಹಿಸಿದೆ
ಸ್ವಾತಂತ್ರೋತ್ಸವದಂದು ಹುಬ್ಬಳ್ಳಿ, ಭಟ್ಕಳ, ಗುಲಬರ್ಗದಂತಹ ಕೆಲವು ಜಿಲ್ಲೆಗಳಲ್ಲಿ  ಪಾಕಿಸ್ತಾನಿ ಧ್ವಜಗಳು ಹಾರಾಡುತ್ತಿರುವುದು ಇಂದು ರಹಸ್ಯವಾಗೆನು ಉಳಿದಿಲ್ಲವಾದರು ಧೇಶಧ್ವಜ ವಿಚಾರ ಬಂದಾಗ ಕೆಲವು ಸಂಘಟನೆಗಳು ಅಡ್ಡಿಪದಿಸುತ್ತಿದೆ.ಇದಕ್ಕೆ  ರಾಜಕೀಯ ಪಕ್ಷದ  ಬೆಂಬಲವಿರುತ್ತದೆ. ಇಂತಹ ಹೇಸಿರಾಜಕೀಯ ಪಕ್ಷಗಳಿಂದ  ಧೇಶೋಧ್ಧಾರವಾಗಲು ಸಾದ್ಯವಿದೆಯೆ?     ಇಂತಹದಕ್ಕೆ ಆಡಳಿತ ಪಕ್ಷಗಳು ಕುಮ್ಮಕ್ಕು ನೀದ್ಡುವುದಾದರೆ ಮುಂದೊಂದು
ದಿನ ಧೇಶದಲ್ಲಿ ಸ್ವಾಭಿಮಾನ ಧೇಶಭಕ್ತಿಯನ್ನುವ ಪದಗಳು ಅರ್ಥಕಳೆದುಕೊಂಡು ಇನ್ನೊಂದು ಬ್ರಿಟೀಶ್ ದಾಳಿಗೆ ಹಾದಿಯಾದಿತು. ಏದ್ದೇಳಿ  ಭಾರತಿಯರೆ  ಏದ್ದೇಳಿ,  ಭಾರತದ ಸಾರ್ವಭೌಮತೆಯನ್ನು ಪುನರುಜ್ಜೀವನಗೋಳಿಸಿ!!!!

 ಕಾಶ್ಮೀರದ ವಿಚಾರಕ್ಕೆ ಬರುವುದಾದರೆ ಈ ಸಮಸ್ಯೆ ಇಂದು ನಿನ್ನೆಯದಲ್ಲ, ಅಕ್ಟೋಬರ್ ೨೬  ೧೯೪೭ರಂದು ಜಮ್ಮು-ಕಾಶ್ಮೀರ್ ಭಾರತದಲ್ಲಿ ಮೀಲೀನವಾದಾಗಿಂದಲು ಈ ಸಮಸ್ಯೆ ಕಾಡುತ್ತಿದೆ
ಭಾರತ ಸ್ವಾತಂತ್ರ್ಯ ಸಂಧರ್ಬದಲ್ಲಿ  ಕಾಶ್ಮೀರಕ್ಕೆ ಕೇವಲ ಮೂರು ಆಯ್ಕೆಗಳಿದ್ದವು, ಭಾರತದೊಂದಿಗೆ ಯಾ ಪಕಿಸ್ತಾನದೊಂದಿಗೆ ಮೀಲೀನಗೊಳ್ಳುವುದು ಅಥವಾ  ಸ್ವಾತಂತ್ರವಾಗಿರುವುದು, ಅಂದಿನ ಕಾಶ್ಮೀರದ ಮಹರಾಜ ರಾಜಾ ಹರಿ ಸಿಂಗ್ ಸ್ವಾತಂತ್ರವಾಗಿರಲು ಬಯಸಿದರು,  ಇದಕ್ಕೆ  ಒಪ್ಪಿಕೊಂಡ ಮೌಂಟ್ ಬ್ಯಾಟನ್ ಅಗಸ್ಟ್ ೧೫ರಂದು
 ಸ್ವಾತಂತ್ಯವನ್ನು ಘೋಷಿಸಿದರು.

ಆದರೆ ೧೯೪೭ ಅಕ್ಟೋಬರ್ ೨೦ರಂದು ಪಾಕಿಸ್ತಾನಿ ಸೈನಿಕರು ಕಾಶ್ಮೀರದಮೇಲೆ ದಾಳಿಮಾಡಿದಾಗ, ಜೀವಬಯದಿಂದ ರಾಜಾ ಹರಿ ಸಿಂಗ್
ಭಾರತದೋಂದಿಗೆ ಮೀಲೀನವಾಗುವ ಆಶಯ ವೆಕ್ತಪಡಿಸಿ( ಅಕ್ಟೋಬರ್೨೪) ಅಕ್ಟೋಬರ್ ೨೬ರಂದು ಮೀಲೀನಪತ್ರವನ್ನು ಅಂದಿನ ಪ್ರಧಾನಿ ನೆಹರುರವರಿಗೆ ರವಾನಿಸಿದರು .ಆ ಪತ್ರದಲ್ಲಿ ಕಾಶ್ಮೀರಕ್ಕೆ ಕೆಲವು
ವಿಶೇಶಸ್ತಾನಮಾನಗಳನ್ನು ಕೇಳಲಾಗಿತ್ತು  ಅವಾಗ ನಡೆದ ಮೊದಲ ತಪ್ಪೇ  "ದಿ ಗ್ರೇಟ್ ನೆಹರು ಬ್ಲಂಡರ್ಸ್!!!!!!!!!!
                                

                                                                                                                                                                          ಮುಂದಿನ ಭಾಗ  ಮುಂದಿನ ವಾರ
ನಿರಿಕ್ಷಿಸಿ   "ದಿ ಗ್ರೇಟ್ ನೆಹರು ಬ್ಲಂಡರ್ಸ್!!

11 comments:

  1. ಕೆಲವೊಂದು ಇತಿಹಾಸದ ಸತ್ಯಗಳು ನಮಗೆ ನಾಚಿಕೆ...
    ಹೇಸಿಗೆ ಆಗುವಂತಿದೆ... ಅಲ್ಲವೆ?

    ReplyDelete
  2. ಲೇಖನ ಮತ್ತು ವಿಷಯ ತು೦ಬ ಇಷ್ಟವಾಯಿತು.ಮು೦ದುವರೆಸಿ

    ReplyDelete
  3. We can't All is well for so many things,
    move on santosh

    ReplyDelete
  4. "ಭಾರತದಲ್ಲಿ ಭಾರತವೇ ತಬ್ಬಲಿ"-100% True! good article.

    ReplyDelete
  5. ನಿಜ ಪ್ರಕಾಶಣ್ಣ , ಭಾರತದಲ್ಲಿ ಇತಿಹಾಸವನ್ನು ತಿರುಚಿ ಬರೆಯಲಾಗಿದೆ ಹಾಗಾಗಿ ನಮ್ಮ ನೈಜ ಇತಿಹಾಸ ಇನ್ನು ರಹಸ್ಯವಾಗೆ ಉಳಿದಿದೆ
    ಇದರ ಬಗ್ಗೆ ತಿಳಿಯಲು ನಾವು ವಿದೇಶಿ ಐತಿಹಾಸಿಕ ತಜ್ಞರನ್ನು ಅವಲಂಬಿಸ ಬೇಕಾದುದ್ದು ನಮ್ಮ ದುರಾದ್ರಷ್ಟ

    ReplyDelete
  6. ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು ದಿಗ್ವಾಸ್ ಹೆಗ್ಡೆ ಯವರೇ

    ReplyDelete
  7. ದನ್ಯವಾದಗಳು ಸತೀಶ್

    ReplyDelete
  8. ನಿಜ ನಾಗರಾಜ ಆದ್ರೆ ಎಲ್ಲಿವರೆಗೆ ಸುಮ್ನೆ ಇರೋಣ? ನಾವು ಸುಮ್ನೆ ಇದ್ದಸ್ಟೂ ಜಾಸ್ತಿನೇ ಆಗತ್ತೆ

    ReplyDelete
  9. ದನ್ಯವಾದಗಳು ತೇಜಸ್ವಿನಿಯವರೆ ನಿಮ್ಮ ಸಲಹೆ- ಸೂಚನೆಗಳಿಗೆ ಸ್ವಾಗತ

    ReplyDelete
  10. Thanks for the information.....
    I was wondering.. why kashmir is against the indian flag hoist...

    ReplyDelete